ಈ ಟಿವಿಯ ಮಂಥನ ಧಾರಾವಾಹಿ ಮೊದಲು ತುಂಬಾ ಚೆನ್ನಾಗಿ ಮೂಡಿಬಂತು. ಅದರ ಸಂಭಾಷಣೆಗಳು ನಿಜವಾಗಿ ಚಿಂತನಶೀಲವಾಗಿದ್ದವು. ಆದರೆ ಕಡೆ ಕಡೆಗೆ ಬಹಳ ಎಳೆದಂತೆನಿಸಿತು. ನಿಷ್ಕಾರಣವಾಗಿ ಯಾವ ಯಾವುದೋ ಪಾತ್ರಗಳನ್ನು ಸೇರಿಸಿ ಬೋರಿಂಗ್ ಅನಿಸತೊಡಗಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಧಾರಾವಾಹಿಯಾಗಿತ್ತು. ನಿಜ ಹೇಳಬೇಕೆಂದರೆ ಮನ್ವಂತರಕ್ಕಿಂತಲೂ ಇದೇ ಚೆನ್ನಾಗಿತ್ತು.
ಆದರೆ ಮಿಂಚು ಮಾತ್ರ ಬಹಳ ಕೆಟ್ಟ ಧಾರಾವಾಹಿ. ಅದರ ಪಾತ್ರ ಚಿತ್ರಣ ಎಷ್ಟು ಕಳಪೆಯಂದರೆ - ಶಂಕರ್ ದಾಸ್ ಅಷ್ಟು ದೊಡ್ಡ ಉದ್ದಿಮೆಯನ್ನು ಅಷ್ಟೆಲ್ಲ ವರ್ಷ ನಡೆಸಿಕೊಂಡು ಬಂದವರು. ಅಳಿಯನನ್ನು ಪೂರ್ತಿಯಾಗಿ ನಂಬಿ ಬಿಡುತ್ತಾರೆ. ಸ್ವರೂಪ ರಾಜೀವ ಕೊಲೆಗಾರ ಎಂದು ಸಾರಿಸಾರಿ ಹೇಳಿದರೂ ಮನೆಯಲ್ಲಿ ಯಾರೂ ಅವಳನ್ನು ನಂಬುವದಿಲ್ಲ. ಕಾತ್ಯಾಯನಿಯನ್ನು ಕೊಲೆ ಮಾಡಲು ಮೊಟಿವ್ ಇದ್ದದ್ದು ರಾಜೀವ್ ಗೆ ಮಾತ್ರ ಎನ್ನುವದು ಯಾರಿಗೂ (ಪೊಲೀಸ್ ರಿಗೆ ಕೂಡ ) ಹೊಳೆಯುವದೇ ಇಲ್ಲ.
ಸೀತಾರಾಮ್ ಏನಾಯಿತು ನಿಮಗೆ ? ಯಾಕೆ ಇಂತಾ ಧಾರಾವಾಹಿಯನ್ನು ತಯಾರಿಸಿದಿರಿ ?
Subscribe to:
Post Comments (Atom)
No comments:
Post a Comment