Sunday, August 15, 2010

ಅರಲಿನಿಂದ ಅರಲಿನತನಕ

ಬಹುಶಹಾ ನಿಮಗೆಲ್ಲ ಅರಲೆಂದರೆ ಗೊತ್ತಿರಲಾರದು. ನಮ್ಮ ಹವಿಗನ್ನದದಲ್ಲಿ ಅರಲೆಂದರೆ ಕೊಚ್ಚೆ ನೀರು ಅಥವಾ ಮಣ್ಣು ನೀರು. ಈ ಬೆಂದ ಕಾಳುರಿನಲ್ಲಿ ಎಲ್ಲಿ ಅರಲು ಎಂತೀರಾ . ಮೈಸೂರ್ ರೋಡು ರಿಂಗ್ ರೋಡು ಜನ್ಕ್ಷನ್ ಒಂದು. ಸಿರ್ಸಿ ಸರ್ಕಲ್ ಇನ್ನೊಂದು. ಅದರಲ್ಲಿ ಗ್ರೇಟು ಏನು ಅಂತೀರಾ? ಗ್ರೇಟು ಆ ಅರಲಿನಿಂದ ಈ ಅರಲಿನತನಕ ಟ್ರಾಫಿಕ್ ಜಾಮ್. ಎರಡೂ ಕಾಲನ್ನು ಊರುತ್ತ ಊರುತ್ತ ಗಾಡಿಯನ್ನು ಎಳೆಯುತ್ತ ಎಳೆಯುತ್ತ ಬಂದೆ. ನಾನೊಬ್ಬನೇ ಅಲ್ಲ. ಇನ್ನೂ ನೂರಾರು ಜನರು ನನ್ನಂತೆ ಬಂದರು. ಇನ್ನೇನು ಮಾಡಬೇಕು ? ರೋಡಿಗೆ ಹೊಡೆಯಲು ಬರುತ್ತದೆಯೇ? ಅಥವಾ ಅರಲಿಗೆ ಹೊಡೆಯಲು ಬರುತ್ತೆದೆಯೇ?

Saturday, August 29, 2009

ಇದು ಅಮ್ಮನಿಗಾಗಲ್ಲ ಮಗನಿಗಾಗಿ

ಮಕ್ಕಳ ಶಿಶುವಾಗಿದ್ದಾಗ ಜೋಗುಳ ಹಾಡದವರಾರು? ಹಾಡಲು ಬರಲಿ ಬರದಿರಲಿ. ಮಕ್ಕಳಿಗೆ ನಿದ್ರೆ ಬರುವತನಕ ಹಾಡಿದ್ದೇ ಹಾಡಿದ್ದು. ( ಪಾಪದವಕ್ಕೆ ಕಿವಿ ಮುಚ್ಚಿಕೊಳ್ಳಲೂ ಗೊತ್ತಿರುವದಿಲ್ಲವಲ್ಲ)

ಇವೆಲ್ಲ ನಮ್ಮ ಹವ್ಯಕ ಸಂಪ್ರದಾಯದ ಜೋಗುಳಗಳು.

ತಮ್ಮಾ ಸುಮ್ಮಂಗಿರು, ಎಮ್ಮೆ ಮನೆಗೆ ಬಕ್ಕು, ಕಮ್ಮನೆ ಜಾಯಿ ಕುಡಿಲಕ್ಕು
ನಿನ್ನಪ್ಪ ಎಮ್ಮೆಯ ತಕ್ಕು ಎಳೆಗಂದಿ… ಓಳೋಳ್ಳೆ

ಆಡಿ ಬರುವನೆ ಬಾಲ ಗೋಡೆ ಸಾದ್ಯಳುವನೆ, ಕಾಲಿಗೆ ತಾಗಿದವೇ ಎರೆ ಮುಳ್ಳು
ತಮ್ಮಯ್ಯನ ಕೈಗೆ ಸೇರಿದವೇ ಸೆರೆ ಹೊನ್ನು

ಅಳುವ ಮಕ್ಕಳ ತಾಯಿ ಹೊಳೆಯ ನೀರಿಗ್ ಹೋದ
ಅಳಿದಿರಿ ರಾಮ ಲಕ್ಶ್ಮಣಾ ನಿಮ್ಮಬ್ಬೆ ಹೊಳೆ ಮಿಂದು ಗಂಗೆ ತರುವಳ

ಕೂಸಿನ ಮದುವಿಗೆ ಯಾರ್ಯಾರ ದಿಬ್ಬಾಣಾ ಗೂಕರ ಕಪ್ಪೆ ಗುಡುಗುಮ್ಮ ಕಚ್ಚಿಪಾಯಿ
ತಾ ಬಪ್ಪಿ ಎಂಬ ಮದುವಿಗೆ

ಅಳಿದಿರು ಎಂದರೇ ಛಲದಿಂದ ಅಳುವನೇ, ಛಲಗೇಡಿ ನಮ್ಮ ತಮ್ಮಯ್ಯ
ಇವನಿಂದ ಕೆಟ್ಟಿತೂ ಮನೆಯ ಕೆಲಸವೂ

ಮುದ್ದು ನೀ ಅಳದಿರು, ಎದ್ದಾಗ ಹಾಲ್ಕೊಳ್ಳು. ನಿದ್ದೆ ಬಂದರೆ ಪವಡಿಸೂ
ದೇವರು ಬುದ್ದಿ ಕೊಟ್ಟಂದಿಗ್ ಹರದಾಡು

Tuesday, March 10, 2009

ಅನ್ನದಾ ರಸ್ತೆಯಲಿ ನೌಕರಿಗೆ ಹೊರಟಿಹರು ಈರ್ವರು ತರುಳೆಯರು, ಮತ್ತೋರ್ವ ದುರುಳೆ
ದುರುಳೆಯೇ ನಾನು? ಅಲ್ಲಲ್ಲ , ಆದರಂತೂ ಅಲ್ಲ ಸರಳೆ
ಬದುಕಬೇಕಲ್ಲ ಈ ಜನರ ಮಧ್ಯೆ

ತರುಳೆಯರ ಕಣ್ಣಲ್ಲಿ ಕನಸು
ಕೆನ್ನೆಯಲಿ ರಾಗ ರಂಗು
ತುಟಿಗಳಲಿ ಮಂದಹಾಸ
ಯಾವ ರಾಜಕುವರನ ಕನಸೋ

ಸರಳೆಯ ಕಣ್ಣಲ್ಲಿ ನಿದ್ರೆ
ಕೆನ್ನೆಯಲಿ ಸುಕ್ಕು
ತುಟಿಗಳಲಿ ಒಡಕು ಮುಚ್ಚಲು ವ್ಯಾಸಲಿನು
ಕುವರ ಓದುತ್ತಿಲ್ಲ ಯಾಕೋ

ನಮ್ಮಯ ರೋಡಲ್ಲಿ ಹೊರಟಿಹರು
ಈರ್ವರು ತರುಳೆಯರು ಮತ್ತೋರ್ವ ದುರುಳೆ

Thursday, June 5, 2008

ಮಳೆಗಾಲದ ಒಂದು ದಿನ

ನಾವೆಲ್ಲರೂ ಬರೆದ ಮೊದಲ ನಿಬಂಧ ಇದೇ ತಾನೆ. ಹೆದರಬೇಡಿ. ಈಗ ಅದನ್ನು ಓದಿಸುತ್ತಿಲ್ಲ.
Great, Blogger is having a language button (Just below html which says Hinda a. And it is letting me providing a list of kannada words when I backspace. Too good!!

ಅಮ್ಮನ ಜೊತೆ ಮಾತಾಡುತ್ತಿದ್ದೆ. ಬಿ ಎಸ್ ಎನ್ ಎಲ್ ಅವರದ್ದು ಒಂದು ಸ್ಕಿಂ ಇತ್ತು. ಮೊಬೈಲ್ ಇಂದ ಯಾವುದೇ ಎರಡು ನಂಬರ್ ಗೆ ಸ್ಪೆಷಲ್ ತಾರಿಫ್. ಎಷ್ಟು ಗೊತ್ತೆ? ೧೦ ಪೈಸೆ ನಿಮಿಷಕ್ಕೆ. ಅದನ್ನು ಅಮ್ಮನ ಮನೆಗೆ ಹಾಕಿಸಿಕೊಂಡಿದ್ದೆ. ಈಗೆ (ಸಾರೀ ದಿಸ್ ಎಡಿಟರ್ ಈಸ್ ಟೈಪಿಂಗ್ ಇಗೆ ಇನ್ಸ್ತೆದ್ ಆಫ್ ಈಗೆ) ಅಮ್ಮನ ಹತ್ತಿರ ಎಷ್ಟು ಬೇಕಾದರೂ ಮಾತಾಡಬಹುದು. ಮಗಳೇ ಫೋನ್ ಇಡು ನನಗೆ ಕೆಲಸ ಇದೆ ಎನ್ನುವ ತನಕ!!
ಸೊ ಅಮ್ಮನ ಹತ್ತಿರ ಮಾತಾಡುತ್ತಿದ್ದೆ. ಟಪ ಟಪತಪ್ ಶಬ್ದ. ಹೊರಗೆ ನೋಡಿದರೆ ಮಳೆ ಬರುತ್ತಾ ಇದೆ. ಓಡಿದೆ. ಟೆರೇಸಿಗೆ. ನನಗು ಒಡಲು ಬರುತ್ತಾ ಎಂದು ಕೇಳಬೇಡಿ. ಅನಿವಾರ್ಯವಾಗಿತ್ತು. ಒಣಗಿಸಿರುವ ಬಟ್ಟೆಯೆಲ್ಲ ಸ್ವಲ್ಪ ಒದ್ದೆ. ಅವೆಲ್ಲ ತಂದು ಕೆಳಗೆ ನ್ಯಾಲೆಗೆ ಒಣಸಿ ಹೊರ ಬಂದರೆ ಬಿಸಿಲು ಬರುತ್ತಿದೆ. %$%^$ ನನ್ನನ್ನು ಸುಮ್ಮನೆ ಓಡಿಸಿದೆಯಾ ಮಳ್ಳುಮಳೆಯೇ ಎಂದುಕೊಂಡೆ. ಅರರೆ ಮತ್ತೆ ಮಳೆಯು ಇದೆ. ಬಿಸಿಲು ಮಳೆ ಎರಡೂ. "ಬಿಸಿಲು ಮಳೆ ಮಂಗನ ಮದುವೆ. ಕಾಗೆ ದಿಬ್ಬಣ" ಮುಂದೆ ಕೇಳಿ. "ಚೋರಟೆ ಚಕ್ಕಲಿ ನಂಜುಳೆ ಪಾಯಸ ಕಪ್ಪೆ ವಾದ್ಯ" ಕೇಳಿದ್ದಿರ. ಬಾಲ್ಯದ ನೆನಪುಗಳೊಂದಿಗೆ ನೋಡುತ್ತ ನಿಂತೆ. ಒಂದು ನಾಯಿ ಓಡುತ್ತ ಬಂತು ಎಲ್ಲೂ ಜಾಗ ಕಾಣುತ್ತಿಲ್ಲ ವಾಪಸ್ ಓದುತ್ತಾ ಹೋಯಿತು. ಒಂದು ಅಮ್ಮ, ಪುಟ್ಟ ಅಮ್ಮ ೧೬-೧೮ ರ ಹುಡುಗಿ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಳು. ಮಗುವಿನ ತಲೆಯನ್ನ ತನ್ನ ದುಪಟ್ಟದಿಂದ ಪೂರ್ತಿ ಮುಚ್ಚಿ ಆದಷ್ಟು ಬೇಗ ಮನೆ ಸೇರಲು ಪ್ರಯತ್ನ ನಡೆಸಿದ್ದಳು. ಮಳೆ ತನ್ನ ಅಬ್ಬರ ಹೆಚ್ಚು ಮಾಡುತ್ತಲೇ ಇತ್ತು. ಕ್ರಿಕೆಟ್ ಆಡಲು ಹೋದ ಮಗ ಎಲ್ಲಿ ನಿಮ್ತಿದ್ದನೋ ಎಂದು ನನ್ನ ಚಿಂತೆ. ಆಮೇಲೆ ಗೊತ್ತಾಯಿತು ಅವರು ಮಳೆಯಲ್ಲೂ ಆಡುತ್ತಿದ್ದರಂತೆ. He is past the age where I should wrap him with my ದುಪಟ್ಟ.
೧೦ ನಿಮಿಶಕ್ಕೆಲ್ಲ ಮಳೆ ನಿಂತಿತು. (ಇನ್ನೇನು ಇಡಿ ದಿನ ಮಳೆ ಬರಲು ಇದೇನು ನಮ್ಮ ಮಲೆನಾದೆನು ? ಹೇಳಿ ಕೇಳಿ ಬೆಂಗಳೂರು. ) ಗಿಡ ಮರಗಳೆಲ್ಲ ತೊಳೆದು ಶುಬ್ರವಾದವು.
ಮುಂದಿನ ಬ್ಲಾಗ್ ಬೇಸಿಗೆಯ ಒಂದು ದಿನ. ನಿನ್ನೆ ಮಳೆಗಾಲವಾದರೆ ಇವತ್ತು ಬೇಸಿಗೆ ಹೇಗೆ ಸಾಧ್ಯ ಎಂದು ಪಾನ್ಚವಿ ಪಾಸ್ ಪ್ರಶ್ನೆ ಮಾಡಬೇಡಿ. ಇದು ಬೆಂಗಳೂರು. ಇಲ್ಲಿ ಹಾಗೇ!
ಬೇಡವಾ? ಬೇಸಿಗೆಯ ಅಟ್ಟಹಾಸದಿಂದ ಹೈರಾಣಾಗಿದ್ದೀರಾ. ಹಾಗಾದರೆ ಚಳಿಗಾಲದ ಒಂದು ದಿನ?
one more note here - I told too soon. This kannada font provided by blogger is not so user friendly. Now I am switching back to Baraha Direct.
Does anybody know how to use kannada fonts in Linux?

Monday, May 26, 2008

ಅಮ್ಮ

this is for all our mothers back home.
ದಶರಥನಲ್ಲ ನಾನು
ಸಾಯುವದಿಲ್ಲ, ವಿಲಪಿಸಿ ನಿನ್ನಗಲಿಕೆಯ
ದುಃಖದಿಂದ

ಆದರೂ
ಕಾಣಲಿಲ್ಲವೇ ನಿನಗೆ
ನನ್ನ ಮುಖದ ಸುಕ್ಕುಗಳಲ್ಲಿ
ನಿನ್ನ ಬಿಟ್ಟಿರಲಾರದ ನೋವು

ದಶರಥನಲ್ಲ ನಾನು
ಆದರೂ
ಗಂಡನ ಕೋಪ
ಅತ್ತೆ ಮಾವನ
ದಬ್ಬಾಳಿಕೆ
ನಾದಿನಿಯರ ಕುಹಕ
ವನ್ನೆಲ್ಲ ಒಂದು ನಗುವಿನಲ್ಲಿ
ಮರೆಸುತ್ತಿದ್ದೆ

ನಿನ್ನ ಲಾಲಿಕೆಯಲ್ಲಿ
ನನ್ನ ವಿಫಲ ಬದುಕಿನ
ಸಾರ್ಥಕ್ಯ ಕಂಡೆ

ಈಗ ನಡುಗುವ ಕಾಲುಗಳಿಗೆ
ನಿನ್ನ ಹೆಗಲಾಸರೆ ಬೇಕಾದಾಗ
ರೋಗ ರುಜಿನಗಳಿಂದ ಸೋತ
ಮನಕ್ಕೆ ನಿನ್ನ ಸಾಂತ್ವನ ಬೇಕಾದಾಗ
ಹೊರಟೆ ನೀನು, ನಿನ್ನ ಕನಸುಗಳನ್ನರಸಿ
ದಶರಥನಲ್ಲ ನಾನು
ಸಾಯಲಾರೆ

ಮಗೂ, ಬಯ್ಯಲಾರೆ ನಿನ್ನ
ತಡೆಯಲೂ ಆರೆ
ನಿನ್ನ ಏಳ್ಗೆಯ ದಾರಿಯಲ್ಲಿ
ಅಡ್ಡಗಾಲಾಗಲಾರೆ
ದಶರಥನಲ್ಲ ನಾನು
ಸಾಯಲಾರೆ

ಬದುಕುವೆ
ನಿನ್ನ ನೆನಪುಗಳ ಊರುಗೋಲೊಂದಿಗೆ
ನಿನ್ನ ಭೆಟ್ಟಿಯ ನಿರೀಕ್ಶೆಯಲ್ಲಿ

Monday, May 12, 2008

ಹರಿಯ ಕರುಣದೊಳಾದ

ಆಕಾಶದ ಫೊಟೊ ಹೊಡೆದು ಇದು ನನ್ನ ಆಕಾಶ ಎಂದರೆ... ಎಂತಹ ಮೂರ್ಖತನ ಎನಿಸುತ್ತದೆ ಅಲ್ಲವೆ? ಹಾಗೆಯೇ ಈ ಮನೆ. ಈ ಧನ ಕನಕ, ಈ ಸಂಸಾರ ಎಲ್ಲವೂ ಅವನ ಸ್ರಷ್ಟಿಯೇ ಅಲ್ಲವೇ? ಈ ಮಾಯಾಜಾಲದಲ್ಲಿ ನಾವು ನನ್ನದು, ನಿನ್ನದು ಎನ್ನುತ್ತ ಕಚ್ಚಾಟ ಮಾಡುತ್ತೇವೆ. ಅವನು ಇದನ್ನೆಲ್ಲ ನೋಡಿ ನಗುತ್ತಿರುತ್ತಾನೆ. ನಾವು ಮಕ್ಕಳಾಟ ನೋಡಿ ನಕ್ಕಂತೆ.

ಹರಿಯ ಕರುಣದೊಳಾದ ಭಾಗ್ಯವನ್ನು ಹರಿ ಸಮರ್ಪಣೆ ಮಾಡಿ ಬದುಕಲು ಕಲಿಯಬೇಕು. ಹೇಗೋ?

ಮಿಂಚು, ಮಂಥನ ಇತ್ಯಾದಿ

ಈ ಟಿವಿಯ ಮಂಥನ ಧಾರಾವಾಹಿ ಮೊದಲು ತುಂಬಾ ಚೆನ್ನಾಗಿ ಮೂಡಿಬಂತು. ಅದರ ಸಂಭಾಷಣೆಗಳು ನಿಜವಾಗಿ ಚಿಂತನಶೀಲವಾಗಿದ್ದವು. ಆದರೆ ಕಡೆ ಕಡೆಗೆ ಬಹಳ ಎಳೆದಂತೆನಿಸಿತು. ನಿಷ್ಕಾರಣವಾಗಿ ಯಾವ ಯಾವುದೋ ಪಾತ್ರಗಳನ್ನು ಸೇರಿಸಿ ಬೋರಿಂಗ್ ಅನಿಸತೊಡಗಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಧಾರಾವಾಹಿಯಾಗಿತ್ತು. ನಿಜ ಹೇಳಬೇಕೆಂದರೆ ಮನ್ವಂತರಕ್ಕಿಂತಲೂ ಇದೇ ಚೆನ್ನಾಗಿತ್ತು.
ಆದರೆ ಮಿಂಚು ಮಾತ್ರ ಬಹಳ ಕೆಟ್ಟ ಧಾರಾವಾಹಿ. ಅದರ ಪಾತ್ರ ಚಿತ್ರಣ ಎಷ್ಟು ಕಳಪೆಯಂದರೆ - ಶಂಕರ್ ದಾಸ್ ಅಷ್ಟು ದೊಡ್ಡ ಉದ್ದಿಮೆಯನ್ನು ಅಷ್ಟೆಲ್ಲ ವರ್ಷ ನಡೆಸಿಕೊಂಡು ಬಂದವರು. ಅಳಿಯನನ್ನು ಪೂರ್ತಿಯಾಗಿ ನಂಬಿ ಬಿಡುತ್ತಾರೆ. ಸ್ವರೂಪ ರಾಜೀವ ಕೊಲೆಗಾರ ಎಂದು ಸಾರಿಸಾರಿ ಹೇಳಿದರೂ ಮನೆಯಲ್ಲಿ ಯಾರೂ ಅವಳನ್ನು ನಂಬುವದಿಲ್ಲ. ಕಾತ್ಯಾಯನಿಯನ್ನು ಕೊಲೆ ಮಾಡಲು ಮೊಟಿವ್ ಇದ್ದದ್ದು ರಾಜೀವ್ ಗೆ ಮಾತ್ರ ಎನ್ನುವದು ಯಾರಿಗೂ (ಪೊಲೀಸ್ ರಿಗೆ ಕೂಡ ) ಹೊಳೆಯುವದೇ ಇಲ್ಲ.
ಸೀತಾರಾಮ್ ಏನಾಯಿತು ನಿಮಗೆ ? ಯಾಕೆ ಇಂತಾ ಧಾರಾವಾಹಿಯನ್ನು ತಯಾರಿಸಿದಿರಿ ?