ನಾವೆಲ್ಲರೂ ಬರೆದ ಮೊದಲ ನಿಬಂಧ ಇದೇ ತಾನೆ. ಹೆದರಬೇಡಿ. ಈಗ ಅದನ್ನು ಓದಿಸುತ್ತಿಲ್ಲ.
Great, Blogger is having a language button (Just below html which says Hinda a. And it is letting me providing a list of kannada words when I backspace. Too good!!
ಅಮ್ಮನ ಜೊತೆ ಮಾತಾಡುತ್ತಿದ್ದೆ. ಬಿ ಎಸ್ ಎನ್ ಎಲ್ ಅವರದ್ದು ಒಂದು ಸ್ಕಿಂ ಇತ್ತು. ಮೊಬೈಲ್ ಇಂದ ಯಾವುದೇ ಎರಡು ನಂಬರ್ ಗೆ ಸ್ಪೆಷಲ್ ತಾರಿಫ್. ಎಷ್ಟು ಗೊತ್ತೆ? ೧೦ ಪೈಸೆ ನಿಮಿಷಕ್ಕೆ. ಅದನ್ನು ಅಮ್ಮನ ಮನೆಗೆ ಹಾಕಿಸಿಕೊಂಡಿದ್ದೆ. ಈಗೆ (ಸಾರೀ ದಿಸ್ ಎಡಿಟರ್ ಈಸ್ ಟೈಪಿಂಗ್ ಇಗೆ ಇನ್ಸ್ತೆದ್ ಆಫ್ ಈಗೆ) ಅಮ್ಮನ ಹತ್ತಿರ ಎಷ್ಟು ಬೇಕಾದರೂ ಮಾತಾಡಬಹುದು. ಮಗಳೇ ಫೋನ್ ಇಡು ನನಗೆ ಕೆಲಸ ಇದೆ ಎನ್ನುವ ತನಕ!!
ಸೊ ಅಮ್ಮನ ಹತ್ತಿರ ಮಾತಾಡುತ್ತಿದ್ದೆ. ಟಪ ಟಪತಪ್ ಶಬ್ದ. ಹೊರಗೆ ನೋಡಿದರೆ ಮಳೆ ಬರುತ್ತಾ ಇದೆ. ಓಡಿದೆ. ಟೆರೇಸಿಗೆ. ನನಗು ಒಡಲು ಬರುತ್ತಾ ಎಂದು ಕೇಳಬೇಡಿ. ಅನಿವಾರ್ಯವಾಗಿತ್ತು. ಒಣಗಿಸಿರುವ ಬಟ್ಟೆಯೆಲ್ಲ ಸ್ವಲ್ಪ ಒದ್ದೆ. ಅವೆಲ್ಲ ತಂದು ಕೆಳಗೆ ನ್ಯಾಲೆಗೆ ಒಣಸಿ ಹೊರ ಬಂದರೆ ಬಿಸಿಲು ಬರುತ್ತಿದೆ. %$%^$ ನನ್ನನ್ನು ಸುಮ್ಮನೆ ಓಡಿಸಿದೆಯಾ ಮಳ್ಳುಮಳೆಯೇ ಎಂದುಕೊಂಡೆ. ಅರರೆ ಮತ್ತೆ ಮಳೆಯು ಇದೆ. ಬಿಸಿಲು ಮಳೆ ಎರಡೂ. "ಬಿಸಿಲು ಮಳೆ ಮಂಗನ ಮದುವೆ. ಕಾಗೆ ದಿಬ್ಬಣ" ಮುಂದೆ ಕೇಳಿ. "ಚೋರಟೆ ಚಕ್ಕಲಿ ನಂಜುಳೆ ಪಾಯಸ ಕಪ್ಪೆ ವಾದ್ಯ" ಕೇಳಿದ್ದಿರ. ಬಾಲ್ಯದ ನೆನಪುಗಳೊಂದಿಗೆ ನೋಡುತ್ತ ನಿಂತೆ. ಒಂದು ನಾಯಿ ಓಡುತ್ತ ಬಂತು ಎಲ್ಲೂ ಜಾಗ ಕಾಣುತ್ತಿಲ್ಲ ವಾಪಸ್ ಓದುತ್ತಾ ಹೋಯಿತು. ಒಂದು ಅಮ್ಮ, ಪುಟ್ಟ ಅಮ್ಮ ೧೬-೧೮ ರ ಹುಡುಗಿ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಳು. ಮಗುವಿನ ತಲೆಯನ್ನ ತನ್ನ ದುಪಟ್ಟದಿಂದ ಪೂರ್ತಿ ಮುಚ್ಚಿ ಆದಷ್ಟು ಬೇಗ ಮನೆ ಸೇರಲು ಪ್ರಯತ್ನ ನಡೆಸಿದ್ದಳು. ಮಳೆ ತನ್ನ ಅಬ್ಬರ ಹೆಚ್ಚು ಮಾಡುತ್ತಲೇ ಇತ್ತು. ಕ್ರಿಕೆಟ್ ಆಡಲು ಹೋದ ಮಗ ಎಲ್ಲಿ ನಿಮ್ತಿದ್ದನೋ ಎಂದು ನನ್ನ ಚಿಂತೆ. ಆಮೇಲೆ ಗೊತ್ತಾಯಿತು ಅವರು ಮಳೆಯಲ್ಲೂ ಆಡುತ್ತಿದ್ದರಂತೆ. He is past the age where I should wrap him with my ದುಪಟ್ಟ.
೧೦ ನಿಮಿಶಕ್ಕೆಲ್ಲ ಮಳೆ ನಿಂತಿತು. (ಇನ್ನೇನು ಇಡಿ ದಿನ ಮಳೆ ಬರಲು ಇದೇನು ನಮ್ಮ ಮಲೆನಾದೆನು ? ಹೇಳಿ ಕೇಳಿ ಬೆಂಗಳೂರು. ) ಗಿಡ ಮರಗಳೆಲ್ಲ ತೊಳೆದು ಶುಬ್ರವಾದವು.
ಮುಂದಿನ ಬ್ಲಾಗ್ ಬೇಸಿಗೆಯ ಒಂದು ದಿನ. ನಿನ್ನೆ ಮಳೆಗಾಲವಾದರೆ ಇವತ್ತು ಬೇಸಿಗೆ ಹೇಗೆ ಸಾಧ್ಯ ಎಂದು ಪಾನ್ಚವಿ ಪಾಸ್ ಪ್ರಶ್ನೆ ಮಾಡಬೇಡಿ. ಇದು ಬೆಂಗಳೂರು. ಇಲ್ಲಿ ಹಾಗೇ!
ಬೇಡವಾ? ಬೇಸಿಗೆಯ ಅಟ್ಟಹಾಸದಿಂದ ಹೈರಾಣಾಗಿದ್ದೀರಾ. ಹಾಗಾದರೆ ಚಳಿಗಾಲದ ಒಂದು ದಿನ?
one more note here - I told too soon. This kannada font provided by blogger is not so user friendly. Now I am switching back to Baraha Direct.
Does anybody know how to use kannada fonts in Linux?
Thursday, June 5, 2008
Monday, May 26, 2008
ಅಮ್ಮ
this is for all our mothers back home.
ದಶರಥನಲ್ಲ ನಾನು
ಸಾಯುವದಿಲ್ಲ, ವಿಲಪಿಸಿ ನಿನ್ನಗಲಿಕೆಯ
ದುಃಖದಿಂದ
ಆದರೂ
ಕಾಣಲಿಲ್ಲವೇ ನಿನಗೆ
ನನ್ನ ಮುಖದ ಸುಕ್ಕುಗಳಲ್ಲಿ
ನಿನ್ನ ಬಿಟ್ಟಿರಲಾರದ ನೋವು
ದಶರಥನಲ್ಲ ನಾನು
ಆದರೂ
ಗಂಡನ ಕೋಪ
ಅತ್ತೆ ಮಾವನ
ದಬ್ಬಾಳಿಕೆ
ನಾದಿನಿಯರ ಕುಹಕ
ವನ್ನೆಲ್ಲ ಒಂದು ನಗುವಿನಲ್ಲಿ
ಮರೆಸುತ್ತಿದ್ದೆ
ನಿನ್ನ ಲಾಲಿಕೆಯಲ್ಲಿ
ನನ್ನ ವಿಫಲ ಬದುಕಿನ
ಸಾರ್ಥಕ್ಯ ಕಂಡೆ
ಈಗ ನಡುಗುವ ಕಾಲುಗಳಿಗೆ
ನಿನ್ನ ಹೆಗಲಾಸರೆ ಬೇಕಾದಾಗ
ರೋಗ ರುಜಿನಗಳಿಂದ ಸೋತ
ಮನಕ್ಕೆ ನಿನ್ನ ಸಾಂತ್ವನ ಬೇಕಾದಾಗ
ಹೊರಟೆ ನೀನು, ನಿನ್ನ ಕನಸುಗಳನ್ನರಸಿ
ದಶರಥನಲ್ಲ ನಾನು
ಸಾಯಲಾರೆ
ಮಗೂ, ಬಯ್ಯಲಾರೆ ನಿನ್ನ
ತಡೆಯಲೂ ಆರೆ
ನಿನ್ನ ಏಳ್ಗೆಯ ದಾರಿಯಲ್ಲಿ
ಅಡ್ಡಗಾಲಾಗಲಾರೆ
ದಶರಥನಲ್ಲ ನಾನು
ಸಾಯಲಾರೆ
ಬದುಕುವೆ
ನಿನ್ನ ನೆನಪುಗಳ ಊರುಗೋಲೊಂದಿಗೆ
ನಿನ್ನ ಭೆಟ್ಟಿಯ ನಿರೀಕ್ಶೆಯಲ್ಲಿ
ದಶರಥನಲ್ಲ ನಾನು
ಸಾಯುವದಿಲ್ಲ, ವಿಲಪಿಸಿ ನಿನ್ನಗಲಿಕೆಯ
ದುಃಖದಿಂದ
ಆದರೂ
ಕಾಣಲಿಲ್ಲವೇ ನಿನಗೆ
ನನ್ನ ಮುಖದ ಸುಕ್ಕುಗಳಲ್ಲಿ
ನಿನ್ನ ಬಿಟ್ಟಿರಲಾರದ ನೋವು
ದಶರಥನಲ್ಲ ನಾನು
ಆದರೂ
ಗಂಡನ ಕೋಪ
ಅತ್ತೆ ಮಾವನ
ದಬ್ಬಾಳಿಕೆ
ನಾದಿನಿಯರ ಕುಹಕ
ವನ್ನೆಲ್ಲ ಒಂದು ನಗುವಿನಲ್ಲಿ
ಮರೆಸುತ್ತಿದ್ದೆ
ನಿನ್ನ ಲಾಲಿಕೆಯಲ್ಲಿ
ನನ್ನ ವಿಫಲ ಬದುಕಿನ
ಸಾರ್ಥಕ್ಯ ಕಂಡೆ
ಈಗ ನಡುಗುವ ಕಾಲುಗಳಿಗೆ
ನಿನ್ನ ಹೆಗಲಾಸರೆ ಬೇಕಾದಾಗ
ರೋಗ ರುಜಿನಗಳಿಂದ ಸೋತ
ಮನಕ್ಕೆ ನಿನ್ನ ಸಾಂತ್ವನ ಬೇಕಾದಾಗ
ಹೊರಟೆ ನೀನು, ನಿನ್ನ ಕನಸುಗಳನ್ನರಸಿ
ದಶರಥನಲ್ಲ ನಾನು
ಸಾಯಲಾರೆ
ಮಗೂ, ಬಯ್ಯಲಾರೆ ನಿನ್ನ
ತಡೆಯಲೂ ಆರೆ
ನಿನ್ನ ಏಳ್ಗೆಯ ದಾರಿಯಲ್ಲಿ
ಅಡ್ಡಗಾಲಾಗಲಾರೆ
ದಶರಥನಲ್ಲ ನಾನು
ಸಾಯಲಾರೆ
ಬದುಕುವೆ
ನಿನ್ನ ನೆನಪುಗಳ ಊರುಗೋಲೊಂದಿಗೆ
ನಿನ್ನ ಭೆಟ್ಟಿಯ ನಿರೀಕ್ಶೆಯಲ್ಲಿ
Monday, May 12, 2008
ಹರಿಯ ಕರುಣದೊಳಾದ
ಆಕಾಶದ ಫೊಟೊ ಹೊಡೆದು ಇದು ನನ್ನ ಆಕಾಶ ಎಂದರೆ... ಎಂತಹ ಮೂರ್ಖತನ ಎನಿಸುತ್ತದೆ ಅಲ್ಲವೆ? ಹಾಗೆಯೇ ಈ ಮನೆ. ಈ ಧನ ಕನಕ, ಈ ಸಂಸಾರ ಎಲ್ಲವೂ ಅವನ ಸ್ರಷ್ಟಿಯೇ ಅಲ್ಲವೇ? ಈ ಮಾಯಾಜಾಲದಲ್ಲಿ ನಾವು ನನ್ನದು, ನಿನ್ನದು ಎನ್ನುತ್ತ ಕಚ್ಚಾಟ ಮಾಡುತ್ತೇವೆ. ಅವನು ಇದನ್ನೆಲ್ಲ ನೋಡಿ ನಗುತ್ತಿರುತ್ತಾನೆ. ನಾವು ಮಕ್ಕಳಾಟ ನೋಡಿ ನಕ್ಕಂತೆ.
ಹರಿಯ ಕರುಣದೊಳಾದ ಭಾಗ್ಯವನ್ನು ಹರಿ ಸಮರ್ಪಣೆ ಮಾಡಿ ಬದುಕಲು ಕಲಿಯಬೇಕು. ಹೇಗೋ?
ಹರಿಯ ಕರುಣದೊಳಾದ ಭಾಗ್ಯವನ್ನು ಹರಿ ಸಮರ್ಪಣೆ ಮಾಡಿ ಬದುಕಲು ಕಲಿಯಬೇಕು. ಹೇಗೋ?
ಮಿಂಚು, ಮಂಥನ ಇತ್ಯಾದಿ
ಈ ಟಿವಿಯ ಮಂಥನ ಧಾರಾವಾಹಿ ಮೊದಲು ತುಂಬಾ ಚೆನ್ನಾಗಿ ಮೂಡಿಬಂತು. ಅದರ ಸಂಭಾಷಣೆಗಳು ನಿಜವಾಗಿ ಚಿಂತನಶೀಲವಾಗಿದ್ದವು. ಆದರೆ ಕಡೆ ಕಡೆಗೆ ಬಹಳ ಎಳೆದಂತೆನಿಸಿತು. ನಿಷ್ಕಾರಣವಾಗಿ ಯಾವ ಯಾವುದೋ ಪಾತ್ರಗಳನ್ನು ಸೇರಿಸಿ ಬೋರಿಂಗ್ ಅನಿಸತೊಡಗಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಧಾರಾವಾಹಿಯಾಗಿತ್ತು. ನಿಜ ಹೇಳಬೇಕೆಂದರೆ ಮನ್ವಂತರಕ್ಕಿಂತಲೂ ಇದೇ ಚೆನ್ನಾಗಿತ್ತು.
ಆದರೆ ಮಿಂಚು ಮಾತ್ರ ಬಹಳ ಕೆಟ್ಟ ಧಾರಾವಾಹಿ. ಅದರ ಪಾತ್ರ ಚಿತ್ರಣ ಎಷ್ಟು ಕಳಪೆಯಂದರೆ - ಶಂಕರ್ ದಾಸ್ ಅಷ್ಟು ದೊಡ್ಡ ಉದ್ದಿಮೆಯನ್ನು ಅಷ್ಟೆಲ್ಲ ವರ್ಷ ನಡೆಸಿಕೊಂಡು ಬಂದವರು. ಅಳಿಯನನ್ನು ಪೂರ್ತಿಯಾಗಿ ನಂಬಿ ಬಿಡುತ್ತಾರೆ. ಸ್ವರೂಪ ರಾಜೀವ ಕೊಲೆಗಾರ ಎಂದು ಸಾರಿಸಾರಿ ಹೇಳಿದರೂ ಮನೆಯಲ್ಲಿ ಯಾರೂ ಅವಳನ್ನು ನಂಬುವದಿಲ್ಲ. ಕಾತ್ಯಾಯನಿಯನ್ನು ಕೊಲೆ ಮಾಡಲು ಮೊಟಿವ್ ಇದ್ದದ್ದು ರಾಜೀವ್ ಗೆ ಮಾತ್ರ ಎನ್ನುವದು ಯಾರಿಗೂ (ಪೊಲೀಸ್ ರಿಗೆ ಕೂಡ ) ಹೊಳೆಯುವದೇ ಇಲ್ಲ.
ಸೀತಾರಾಮ್ ಏನಾಯಿತು ನಿಮಗೆ ? ಯಾಕೆ ಇಂತಾ ಧಾರಾವಾಹಿಯನ್ನು ತಯಾರಿಸಿದಿರಿ ?
ಆದರೆ ಮಿಂಚು ಮಾತ್ರ ಬಹಳ ಕೆಟ್ಟ ಧಾರಾವಾಹಿ. ಅದರ ಪಾತ್ರ ಚಿತ್ರಣ ಎಷ್ಟು ಕಳಪೆಯಂದರೆ - ಶಂಕರ್ ದಾಸ್ ಅಷ್ಟು ದೊಡ್ಡ ಉದ್ದಿಮೆಯನ್ನು ಅಷ್ಟೆಲ್ಲ ವರ್ಷ ನಡೆಸಿಕೊಂಡು ಬಂದವರು. ಅಳಿಯನನ್ನು ಪೂರ್ತಿಯಾಗಿ ನಂಬಿ ಬಿಡುತ್ತಾರೆ. ಸ್ವರೂಪ ರಾಜೀವ ಕೊಲೆಗಾರ ಎಂದು ಸಾರಿಸಾರಿ ಹೇಳಿದರೂ ಮನೆಯಲ್ಲಿ ಯಾರೂ ಅವಳನ್ನು ನಂಬುವದಿಲ್ಲ. ಕಾತ್ಯಾಯನಿಯನ್ನು ಕೊಲೆ ಮಾಡಲು ಮೊಟಿವ್ ಇದ್ದದ್ದು ರಾಜೀವ್ ಗೆ ಮಾತ್ರ ಎನ್ನುವದು ಯಾರಿಗೂ (ಪೊಲೀಸ್ ರಿಗೆ ಕೂಡ ) ಹೊಳೆಯುವದೇ ಇಲ್ಲ.
ಸೀತಾರಾಮ್ ಏನಾಯಿತು ನಿಮಗೆ ? ಯಾಕೆ ಇಂತಾ ಧಾರಾವಾಹಿಯನ್ನು ತಯಾರಿಸಿದಿರಿ ?
Wednesday, May 7, 2008
ಕೆಲವು ಜೋಕ್ಗಳು
ಒಬ್ಬ ಸರ್ದಾರ್ಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತ ಇದ್ದ. ಒಂದು ಬಾಳೆಹಣ್ಣಿನ ಸಿಪ್ಪೆ ಇತ್ತು. ಅದರ ಮೇಲೆ ಕಾಲಿಟ್ಟು ಜಾರಿಬಿದ್ದ. ಮರು ದಿನ ಮತ್ತೆ ಅಲ್ಲೆ ಒಂದು ಬಾಳೆ ಹಣ್ಣಿನ ಸಿಪ್ಪೆ ನೋಡಿ ಏನು ಹೇಳಿದ?
ಉತ್ತರ : ಇವತ್ತೂ ಜಾರಿ ಬೀಳಬೇಕಲ್ಲಪ್ಪಾ.
ಮೂರನೇ ದಿನವೂ ಅಲ್ಲೊಂದು ಅಲ್ಲ ಎರಡು ಬಾಳೆಹಣ್ಣಿನ ಸಿಪ್ಪೆ ಇದ್ದವು. ನೋಡಿದ ಸರ್ದಾರ್ಜಿ ಏನು ಹೇಳಿದ ?
ಉತ್ತರ : ಇವತ್ತಂತೂ ಒಪ್ಶನ್ ಸಹ ಇದೆ!!
------------------------------------------------------------------------------------------
ಬಹಳಷ್ಟು ನಾಯಿಗಳು ಬೇಕಾದರೆ ಏನು ಮಾಡಬೇಕು ?
ಒಂದು ಖಾಲಿ ಡಬ್ಬಿಯಲ್ಲಿ ಒಂದು ನಾಯಿಯನ್ನು ಹಾಕಿಡಬೇಕು.
ಹೇಗೆ ಅರ್ಥ ಆಗಲಿಲ್ಲವಾ ? ಎಂಪ್ಟಿ ವೆಸೆಲ್ ಮೇಕ್ಸ್ ಮೋರ್ ನಾಯಿಸ್
-----------------------------------------------------------------------------------------
ಒಬ್ಬ ಸರ್ದಾರ್ಜಿ ಒಂದು ಹುಡುಗಿಯ ಹತ್ತಿರ ಕೇಳಿದ. "ಡಾರ್ಲಿಂಗ್ ನನ್ನ ಮದುವೆ ಆಗ್ತೀಯಾ". ಹುಡುಗಿ ಹೇಳಿದಳು. "ತಮೀಜ್ ಸೇ ಬಾತ್ ಕರ್". ಅವನು ಆಗ ಕೇಳಿದ " ಬೆಹೆನ್ ಜಿ ನನ್ನ ಮದುವೆ ಆಗ್ತೀರಾ"
--------------------------------------------------------------------------------------------
ಉತ್ತರ : ಇವತ್ತೂ ಜಾರಿ ಬೀಳಬೇಕಲ್ಲಪ್ಪಾ.
ಮೂರನೇ ದಿನವೂ ಅಲ್ಲೊಂದು ಅಲ್ಲ ಎರಡು ಬಾಳೆಹಣ್ಣಿನ ಸಿಪ್ಪೆ ಇದ್ದವು. ನೋಡಿದ ಸರ್ದಾರ್ಜಿ ಏನು ಹೇಳಿದ ?
ಉತ್ತರ : ಇವತ್ತಂತೂ ಒಪ್ಶನ್ ಸಹ ಇದೆ!!
------------------------------------------------------------------------------------------
ಬಹಳಷ್ಟು ನಾಯಿಗಳು ಬೇಕಾದರೆ ಏನು ಮಾಡಬೇಕು ?
ಒಂದು ಖಾಲಿ ಡಬ್ಬಿಯಲ್ಲಿ ಒಂದು ನಾಯಿಯನ್ನು ಹಾಕಿಡಬೇಕು.
ಹೇಗೆ ಅರ್ಥ ಆಗಲಿಲ್ಲವಾ ? ಎಂಪ್ಟಿ ವೆಸೆಲ್ ಮೇಕ್ಸ್ ಮೋರ್ ನಾಯಿಸ್
-----------------------------------------------------------------------------------------
ಒಬ್ಬ ಸರ್ದಾರ್ಜಿ ಒಂದು ಹುಡುಗಿಯ ಹತ್ತಿರ ಕೇಳಿದ. "ಡಾರ್ಲಿಂಗ್ ನನ್ನ ಮದುವೆ ಆಗ್ತೀಯಾ". ಹುಡುಗಿ ಹೇಳಿದಳು. "ತಮೀಜ್ ಸೇ ಬಾತ್ ಕರ್". ಅವನು ಆಗ ಕೇಳಿದ " ಬೆಹೆನ್ ಜಿ ನನ್ನ ಮದುವೆ ಆಗ್ತೀರಾ"
--------------------------------------------------------------------------------------------
Monday, May 5, 2008
ಕನ್ನಡ ಬರೆಯುವುದು ಹೇಗೆ
ಹೆದರಬೇಡಿ. ನಾನು ನಿಮ್ಮನ್ನು ಅ ಆ ಇ ಈ ಕಲಿಸಲು ಬಿನ್ನೆತ್ತಿಗೆ ಕರೆದುಕೊಂಡು ಹೋಗುತ್ತಿಲ್ಲ. ( ನಿಮಗೆಲ್ಲ ಹೊಸ ಜನರೇಶನ್ನವರಿಗೆ ಬಿನ್ನೆತ್ತಿ ಎಂದರೆ ಗೊತ್ತಿರುವದಿಲ್ಲ. ನಾವು ಮಕ್ಕಳಾಗಿದ್ದಾಗ ಎಲ್ ಕೆ ಜಿ, ಯು ಕೆ ಜಿ , ಒಂದು ಕೆ ಜಿ ಎಲ್ಲಾ ಇರಲಿಲ್ಲ. ನೇರವಾಗಿ ಒಂದನೇ ಕ್ಲಾಸು. ಇನ್ನು ಮನೆಯಲ್ಲಿ ತುಂಬಾ ಗಲಾಟೆ ಮಾಡುವ ಚಿಕ್ಕ ಮಕ್ಕಳನ್ನು ಹೆಸರು ಹಚ್ಚದಿದ್ದರೂ ಶಾಲೆಗೆ ಕಳಿಸುತ್ತಿದ್ದರು. ಅವರೇ ಬಿನ್ನೆತ್ತಿ. (ಬಿನ್ - ವಿತೌಟ್. ಉರ್ದು?) ). ನಾನು ಕನ್ನಡ ಬ್ಲೋಗ್ ಆರಂಭಿಸಲು ಬಹಳ ಕಷ್ಟ ಪಟ್ಟೆ. ಅದಕ್ಕೆ ಈ ಹೆಲ್ಪ್ ಬ್ಲೋಗ್.
ಮೊದಲು ಬರಹ ಸೋಪ್ಟ್ ವೇರನ್ನು http://www.baraha.com/ . ಇಲ್ಲಿಂದ ಡೌನ್ ಲೋಡ್ ಮಾಡಿ. ನಂತರ ಬ್ಲೊಗರ್ ಅಥವಾ ಇನ್ಯಾವುದೊ ಒಂದು ಬ್ಲೊಗನಲ್ಲಿ ಹೊಸ ಪೋಸ್ಟ್ ಬರೆಯುವಾಗ ಬರಹ ಡೈರೆಕ್ಟ್ ಓನ್ ಮಾಡಿ. ನಿಮ್ಮ ಟಾಸ್ಕ್ ಬಾರ್ ನಲ್ಲಿ ಒಂದು ಐಕಾನ್ ಕಾಣುತ್ತದೆ. ಅದರಲ್ಲಿ right click ಮಾಡಿ languages ನಲ್ಲಿ ಕನ್ನಡ ಯುನಿಕೋಡ್ ಸೆಲೆಕ್ಟ್ ಮಾಡಿ. ಅದಾದ ಮೇಲೆ ನೀವು ಏನು ಬೇಕಾದರೂ ಕನ್ನಡದಲ್ಲಿ ಬರಯಬಹುದು. ಎಂಜಾಯ್ !!! (ನಿಜವಾಗಿ ಹೇಳುವದಿದ್ದರೆ ಕನ್ನಡವನ್ನು ಇಂಗ್ಲಿಷ್ ಕೀಬೋರ್ಡ್ ನಲ್ಲಿ ಟೈಪ್ ಮಾಡುವದು ಎನಿತಿಂಗ್ ಬಟ್ ಎಂಜಾಯ್ ಮೆಂಟ್)
ಮೊದಲು ಬರಹ ಸೋಪ್ಟ್ ವೇರನ್ನು http://www.baraha.com/ . ಇಲ್ಲಿಂದ ಡೌನ್ ಲೋಡ್ ಮಾಡಿ. ನಂತರ ಬ್ಲೊಗರ್ ಅಥವಾ ಇನ್ಯಾವುದೊ ಒಂದು ಬ್ಲೊಗನಲ್ಲಿ ಹೊಸ ಪೋಸ್ಟ್ ಬರೆಯುವಾಗ ಬರಹ ಡೈರೆಕ್ಟ್ ಓನ್ ಮಾಡಿ. ನಿಮ್ಮ ಟಾಸ್ಕ್ ಬಾರ್ ನಲ್ಲಿ ಒಂದು ಐಕಾನ್ ಕಾಣುತ್ತದೆ. ಅದರಲ್ಲಿ right click ಮಾಡಿ languages ನಲ್ಲಿ ಕನ್ನಡ ಯುನಿಕೋಡ್ ಸೆಲೆಕ್ಟ್ ಮಾಡಿ. ಅದಾದ ಮೇಲೆ ನೀವು ಏನು ಬೇಕಾದರೂ ಕನ್ನಡದಲ್ಲಿ ಬರಯಬಹುದು. ಎಂಜಾಯ್ !!! (ನಿಜವಾಗಿ ಹೇಳುವದಿದ್ದರೆ ಕನ್ನಡವನ್ನು ಇಂಗ್ಲಿಷ್ ಕೀಬೋರ್ಡ್ ನಲ್ಲಿ ಟೈಪ್ ಮಾಡುವದು ಎನಿತಿಂಗ್ ಬಟ್ ಎಂಜಾಯ್ ಮೆಂಟ್)
Subscribe to:
Posts (Atom)